Saturday, July 12, 2008

ಹಸುರಿನ ಮಡಿಲು ಏನೆಂಥ ಒಡಲು



ಹಸುರಿನ ಮಡಿಲು ಏನೆಂಥ ಒಡಲು
ನಿನ್ನ ಆಸರೆಯೇ ಮುದವಿಟ್ಟ ಗುಡಿಯು


ಓ ನಮ್ಮ ತಾಯಿ... ಗಿಡಬಳ್ಳಿಯಾಗಿ
ನೆಲದ ಹಾಸಾಗಿ ತಲೆಮೇಲೆ ತೂಗಿ
ನೀನೇನೆ ನಮ್ಮ ಆಹಾರವಮ್ಮ
ಅಪ್ಪಿಡುವೆ ನಿನ್ನ ಅಪ್ಪಿಕೋ ಬಾಮ್ಮ


ಓ ನೀನೆ ಮಾಯಿ... ಹೂಗೊಂಚಲಾಗಿ
ಮಧುವಾಗಿ ಚೆಲುವಾಗಿ ಸವಿಜೇನು ತೂಗಿ
ನೀನೇನೆ ನಮ್ಮ ಒಲವಿಂಚಿಯಮ್ಮ
ಅಪ್ಪಿಡುವೆ ನಿನ್ನ ಅಪ್ಪಿಕೋ ಬಾಮ್ಮ


ಹೇ ಮಹಾ ಮಾಯಿ...ಹಸುರಾದ ಬಾಯಿ
ಚಿಗುರಿಡುವ ಸೊನೆಗರೆವ ಹೂಹಣ್ಣು ಕಾಯಿ
ನೀನೇನೆ ನಮ್ಮ ಗುರಿ ತೋರಿಸಮ್ಮ
ಅಪ್ಪಿಡುವೆ ನಿನ್ನ ಅಪ್ಪಿಕೋ ಬಾಮ್ಮ
- ವೇಣುಗೋಪಾಲ ಸೊರಬ

********
ವೇಣುಗೋಪಾಲ ಸೊರಬ(1937-)ಕನ್ನಡದ ಪ್ರಮುಖ ಕವಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯವರು
ಮುಸುಕು-ನಸುಕು ,ಜೀವ-ಜೀವಂತ ,ಗರಿ ಮುರಿದ ಹಕ್ಕಿಗಳು ಇವರ ಕೆಲವು ಕವನ ಸಂಕಲನಗಳು
ಸೊರಬ ಅವರ ಗರಿ ಮುರಿದ ಹಕ್ಕಿಗಳು”(1974) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ

4 Comments:

Blogger ಶಾಂತಲಾ ಭಂಡಿ (ಸನ್ನಿಧಿ) said...

ಮಾಲಾ...
ಒಂದೊಳ್ಳೆಯ ಕವನ ಹಾಗೂ ಸುಂದರಸೊಬಗಿನ ಬನದಬಣ್ಣವನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು.

12:35 PM  
Blogger Unknown said...

ನಿಸರ್ಗ ರಮಣೀಯ ಸುಂದರ ಚಿತ್ರ - ಅದಕ್ಕೆ ತಕ್ಕುದಾದ ಕವನ ಹೊಂದಿಸಿದ್ದಕ್ಕೆ ವಂದನೆಗಳು

8:33 PM  
Blogger Unknown said...

ನಮಸ್ಕಾರ ಮಾಲ ರಾವ್ ರವರಿಗೆ,

ನಿಮ್ಮ ಬ್ಲಾಗ್‍ ಚಿತ್ರ-ದುರ್ಗ ನೋಡಿದೆ. ತುಂಬಾ ಸೊಗಸಾಗಿ ಬರೆಯುತ್ತೀರಿ.

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com/

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ನಿಮ್ಮ ಕವನಗಳನ್ನು ಸಹ ಪ್ರಕಟಿಸಿ, ಎಲ್ಲಾ ಕನ್ನಡ ಸ್ನೇಹಿತರಿಗೂ ಸೇರವಂತೆ ಮಾಡಿ.


ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ kannadajokes@gmail.com

ಧನ್ಯವಾದಗಳೊಂದಿಗೆ.....

10:28 AM  
Anonymous Anonymous said...

Namaskar nimmelarigu,

Nanna hesaru Lingaraju.N, chitradurgada challakere inda, chitradurga blog nodi bahala sontasha ayitu, nanage kannada nudi baruthe, aadare ille kannadadali hege bariyudu anta mail madi( lingaraju.nhr2007@yahoo.co.in) nimma sandeshkkagi kayutha iruthhene

inti nimmaya kanada premi,

11:58 AM  

Post a Comment

Subscribe to Post Comments [Atom]

<< Home