Thursday, July 31, 2008

ಸೀದು ಹೋಗುತಿದೆ ಹೂವಿನ ತೋಟ...

ದಿನವೂ ತೆರೆಯುವ ಬೆಳಗಿನ ಬಾನೊಳು ರಕ್ತದ ಕಲೆಗಳ ಛಾಯೆ ಇದೆ
ದಿನವೂ ಮುಚ್ಚುವ ಸಂಜೆಗತ್ತಲೊಳು ನೋವಿನ ದನಿಗಳ ಹುಯ್ಯಲಿದೆ


ದಟ್ಟಕತ್ತಲಿನ ಕಾರಿರುಳಲ್ಲಿ ಒಳಸಂಚಿನ ಪಿಸುಮಾತುಗಳು
ನೆಮ್ಮದಿಗಳ ಮನೆಬಾಗಿಲ ಬಡಿಯುವ
ಭಯ...
ಸಂಶಯ...
ಭಯ ಸಂಶಯಗಳ ಭೂತಗಳು


ದಿನಬೆಳಗಾದರೆ ಹತ್ಯಾಕಾಂಡದ ತತ್ತರಿಸುವ ದುರ್ವಾರ್ತೆಗಳು
ಮೂರು ಬಣ್ಣಗಳ ಧ್ವಜದೆತ್ತರಕು ಹಬ್ಬಿದ ಭೀತಿಯ ಜ್ವಾಲೆಗಳು
ಛಿಧ್ರವಾಗುತಿದೆ ಮುಗ್ಧ್ರರ ಬದುಕು ಕ್ಷುದ್ರಸ್ವಾರ್ಥಗಳ ಧಾಳಿಯಲಿ
ಸೀದುಹೋಗುತಿದೆ ಹೂವಿನ ತೋಟ ಕುರುಡು ಬೆಂಕಿಗಳ ಕುಣಿತದಲಿ


ವ್ಯರ್ಥವಾಗುತಿದೆ ಹಿರಿಯರು ಕಲಿಸಿದ
ಸತ್ಯ ಅಹಿಂಸೆಯ ಮಂತ್ರಗಳು
ಉಸಿರು ಕಟ್ಟಿಸುವ ದಟ್ಟ ಹೊಗೆಯೊಳಗೆ
ತಡವರಿಸುತ್ತಿವೆ ಹೆಜ್ಜೆಗಳು

_ಕೆ.ಸಿ. ಶಿವಪ್ಪ

**********
ನಾನು ಈ ಹಾಡು ಕೇಳಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ.
ಕವಿ ಈ ಕವಿತೆಯನ್ನು ಬರೆದು ಇನ್ನೂ ಹೆಚ್ಚು ವರ್ಷಗಳಾಗಿರಬಹುದು
ಪ್ರಕಾಶಿಸುತ್ತಿರುವ ಮೇರ ಮಹಾನ್ ಭಾರತದಲ್ಲಿ ಅದೇ ಪರಿಸ್ಥಿತಿಯನ್ನು ಮೇನೆಟೇನ್ ಮಾಡಿಕೊಂಡು ಬಂದಿರುವುದಕ್ಕೆ ನನಗೆ ಬಹಳ ಹೆಮ್ಮೆಯೆಸುತ್ತದೆ....

**********
ಕೆ.ಸಿ. ಶಿವಪ್ಪ ಅವರು ನನ್ನ ಮೆಚ್ಚಿನ ಕವಿಗಳಲ್ಲೊಬ್ಬರು ಹಲವಾರು ಸುಂದರ ಕವನಗಳನ್ನು ಬರೆದಿದ್ದಾರೆ
ಅವರ ಬಗ್ಗೆ ನನಗೆ ಹೆಚ್ಚೇನೂ ತಿಳಿದಿಲ್ಲ. ನಿಮಗ್ಯಾರಿಗಾದರೂ ವಿವರಗಳು ಗೊತ್ತಿದ್ದರೆ ಇಲ್ಲಿ ದಯವಿಟ್ಟು ಹಂಚಿಕೊಳ್ಳಿ

0 Comments:

Post a Comment

Subscribe to Post Comments [Atom]

<< Home