Wednesday, November 01, 2006

ಹೋಗಬೇಕು ನಾನಲ್ಲಿಗೆ...!


ಎಲ್ಲಿ ಹೂವರಳಿ ಮಾತಾಡುವುದೋ,
ಎಲ್ಲಿ ಹಕ್ಕಿ ಹಾಡಾಗಿ ಮುಗಿಯುವುದೋ,
ಎಲ್ಲಿ ಚೆಲುವು ಒಲವಾಗಿ ಫಲಿಸುವುದೋ,
ಹೊಳೆಯ ನೀರು ಥಳಥಳಿಸಿ ಹೊಳೆಯುವುದೋ,
-ಹೋಗಬೇಕು ನಾನಲ್ಲಿಗೆ...!

`ಹೋಗಬೇಕು ನಾನಲ್ಲಿಗೆ' ಕೆ.ಎಸ್.ನರಸಿಂಹ ಸ್ವಾಮಿಯವರ ಸೊಗಸಾದ ಕವನಗಳಲ್ಲೊಂದು.ಪ್ರತಿ ದಿನವೂ ಈ ಕವನದ ಒಂದು ಚರಣವನ್ನು ತೆಗೆದುಕೊಂಡು ಅದಕ್ಕೆ `ಆದಷ್ಟೂ'ಸರಿಹೊಂದುವ ಚಿತ್ರವೊಂದರ ಜೊತೆ ದುರ್ಗದಲ್ಲಿ ಹಾಕಬೇಕು ಎಂಬುದು ನನ್ನ ಯೋಚನೆ.ಇದು ನಿಮಗೆ `ರಾಜ್ಯೋತ್ಸವದ' ಕಾಣಿಕೆ
ನೋಡಿ... ಹೊಳೆಯ ನೀರು ಥಳಥಳಿಸುತ್ತಿರುವಲ್ಲಿ ಚೆಲುವಾಗಿ, ಒಲವಾಗಿ, ಅರಳಿರುವ ಈ ತಾವರೆ ಹಕ್ಕಿಯ ಹಾಡಿಗೆ ನಗುತ್ತಿರುವಂತಿದೆ...


ಹೊಸ ಪ್ರಯೋಗ ಮಾಡುವಾಗ ಒಂದಿಷ್ಟು ಕುಂದು ಕೊರತೆಗಳು ಕಾಣುವುದು ಸಹಜ.ಸಹೃದಯಿ ಕನ್ನಡಿಗರು ಅಂಥ ಕೊರತೆಗಳನ್ನು ಉದಾರತೆಯಿಂದ ನೋಡುತ್ತೀರೆಂದು ನಂಬುವೆ

ನಿಮಗೆಲ್ಲಾ ಚಿನ್ನದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

2 Comments:

Anonymous Anonymous said...

tumbA sogasada chitra, ashte sogasada baraha. rajyotsavakke idakkinta bere koduge yake!

10:33 PM  
Blogger mala rao said...

ವೇಣು ವಿನೋದ್ ಅವರಿಗೆ
ದುರ್ಗಕ್ಕೆ ಸ್ವಾಗತ ನಿಮ್ಮ ಮೆಚ್ಚುಗೆಗಾಗಿ ಥ್ಯಾಂಕ್ಸ್
ಹೀಗೇ ಆಗಾಗ ಬರುತ್ತಿರಿ

9:30 PM  

Post a Comment

Subscribe to Post Comments [Atom]

<< Home