Friday, November 03, 2006

ನೋವಿನ ನಡುವಿನ ಹೊಸದನಿ...

ಹೊನ್ನಾದ ಬದುಕು ಭರವಸೆಯನಿತ್ತು
ಎಲ್ಲರನು ಸಲಹುತಿಹುದೋ
ಕಾಳ್ಗಿಚ್ಚಿನಿಂದ ಸುಟ್ಟಿರುವ ಕಾಡು
ಹಾಡಾಗಿ ಮೆರೆಯುತಿಹುದೋ
ಎಲ್ಲಿಲ್ಲಿ ನೋವು ಅಲ್ಲಲ್ಲಿಗೋಡಿ
ಹೊಸದನಿಯು ಮೂಡುತಿಹುದೋ
-ಹೋಗಬೇಕು ನಾನಲ್ಲಿಗೆ!

ಕಾಳ್ಗಿಚ್ಚಿನಿಂದ ಸುಟ್ಟಿರುವ ಕಾಡಿಗೆ, ಒಡಲು ಬರಿದಾಗಿ ನಿಂತ ಮರಗಳಿಗೆ ತಿಳಿನೀಲಿ ಬಾನು ಸಮಾಧಾನ ಹೇಳುವಂತಿದೆ...ನೋವು ತಿಂದ ಜೀವಗಳಿಗೆ ಹೊನ್ನಿನ ಬದುಕಿನ ಭರವಸೆಯನಿತ್ತು ಸಲಹಲು ಮೋಡಗಳು ಅಗೋ... ತಾ ಬಂದಿವೆ...ಹೊಸದನಿಯಲ್ಲಿ ಹೊಸಹಾಡು ಮೆರೆಸಲು ಮರಗಳು ಮನಸ್ಸು ಮಾಡಬೇಕಷ್ಟೇ....

ಜೀವನದ ಹಲವು ತಿರುವುಗಳಲ್ಲಿ ನಿರೀಕ್ಷಿಸದ ರೀತಿಯಲ್ಲಿ ಪೆಟ್ಟು ತಿನ್ನುವ, ಕಣ್ತುಂಬ ನೀರು ತುಂಬಿಸುವ ಪರಿಸ್ಥಿತಿಗಳಿಗೆ ಸಿಲುಕದೇ ಉಳಿದವರು ಯಾರು? ಕಣ್ಣೀರಿನಿಂದ ದೃಷ್ಟಿ ಮಂಜಾದ ಸಮಯದಲ್ಲಿ ನಮಗೆ ಹೊಸಭರವಸೆಯನ್ನಿತ್ತು ಸಲಹಲು ಬಂದ `ಮೋಡಗಳೆಡೆಗೆ' ನಮ್ಮ ನೋಟ ಕುರುಡಾಗದಿರಲಿ....

ರಾಜ್ಯೋತ್ಸವ ವಿಶೇಷ- ಹೋಗಬೇಕು ನಾನಲ್ಲಿಗೆ-3

0 Comments:

Post a Comment

Subscribe to Post Comments [Atom]

<< Home