Tuesday, September 19, 2006

......ಬಾರೇ ಬೇಗ ಸಖೀ...!

ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖೀ...' ಎಂಬುದು ಗೋಪಿಯೊಬ್ಬಳ ಧಾವಂತ.ಸುತ್ತೀ ಸುತ್ತೀ ಕಾಲು ನೋಯುತ್ತಿದೆ ಎಂದು ಬೆಂಚು ಕಂಡ ತಕ್ಷಣ `ಕೂರುವ ಬಾರೇ ಬೇಗ ಸಖೀ...' ಎಂಬುದು` ಸೌತ್ ಟಾಹೋ' ನಲ್ಲಿ ಸಖಿಯೊಬ್ಬಳ ಅಳಲು!

ಕೂರಲು ನೋಡಿದರೆ ಬೆಂಚಿನ ಮೇಲೆ ಜಾಗವೆಲ್ಲಿದೇ...?

ರಾತ್ರೆಯೆಲ್ಲಾ ಬಿದ್ದ ಮಲ್ಲಿಗೆ ಬಿಳುಪಿನ ಮಂಜು,

ಮಿಸ್ಸು "ಮಂಜೂ..." ಅಂತ ಅಟೆಂಡೆಂನ್ಸ್ ಕೂಗುವ ಮೊದಲೇ

`ಎಸ್ಸ್ ಮಿಸ್ಸ್..." ಅನ್ನುತ್ತಾ ಬೆಂಚಿನ ಪೂರ್ತಿ ಕೂತು ಬಿಟ್ಟಿದೆ!

ಲೇಟ್ ಲತೀಫ್ ಗಳಿಗೆ ಇಲ್ಲಿ ಜಾಗವೇ ಇಲ್ಲಾ...

3 Comments:

Blogger Mahantesh said...

hmmm!!!! re neeja heLi ...elliMda collect maDatira snaps gaLanna?
tuMba chennagi iratave....
late latifgaLige jaaga bere illa aMtira...:)...

11:45 PM  
Blogger mala rao said...

ಮಹಂತೇಶ್ ಅವರೇ,
ನಿಜಾನೇ ಹೇಳ್ತಿದೀನಿ "ಚಿತ್ರ-ದುರ್ಗ" ದ ಎಲ್ಲಾ ಫೋಟೋ
ಗಳನ್ನೂ ನಾನೇ ನನ್ನ ಕ್ಯಾಮರದಲ್ಲಿ ತೆಗೆದಿರೋದು
ನಾನು ತೆಗೆದ ಫೋಟೋಗಳನ್ನು ಮಾತ್ರ ಉಪಯೋಗಿಸ
ಬೇಕು ಎಂಬುದು ನಾನು ಹಾಕಿ ಕೊಂಡಿರುವ ನಿಯಮ!
ಇನ್ ಫ್ಯಾಕ್ಟ್ ನಾನು ತೆಗೆದ ಚಿತ್ರಗಳಿಗೆ ಸ್ವಲ್ಪ ಬೆಳಕು ತೋರಿಸುವಾ ಅಂತನೇ ಈ ಬ್ಲಾಗ್ ಶುರು ಮಾಡಿದ್ದು ನಾನು
ಎನಿವೇ.. ನನ್ನ ಚಿತ್ರಗಳನ್ನು ಮೆಚ್ಚಿದ್ದಕ್ಕೆ ,ಮೆಚ್ಚುಗೆ ಹೇಳಿದ್ದಕ್ಕೆ
ವಂದನೆಗಳು

12:38 AM  
Blogger Anveshi said...

ಛೆ.... ನಾನು ಬಂದಿದ್ದೇ ಲೇಟ್ ಆಗೋಯ್ತು... ಆಗ್ಲೇ ಸಾವ್ರ ಸಾವ್ರ ಪೋಸ್ಟ್‌ಗಳು.

ಶಾಲೆಗೆ ಬೆಂಚು ಬಿಸಿ ಮಾಡಲು ಬರೋವ್ರು ಈ ಮಂಜಿನ ಮೇಲೆ ಕೂತರೆ, ಮಂಜು ಕರಗುತ್ತದಲ್ಲಾ... ಆಮೇಲೆ ಸರಿಯಾಗಿ ಕೂರಬಹುದಲ್ವಾ... !!!

ನೀವೇ ಫೋಟೋ ತೆಗೆದು ಹಾಕೋದ್ರಿಂದ... ಇಲ್ಲಿಂದ ನಾನೂ ಫೋಟೋ ಕದಿಯಬಹುದಲ್ವಾ...!!! ನೀವು ಕೊಡೋ Coffee- right ಆಗಿರುತ್ತದೆ ತಾನೇ?

1:23 AM  

Post a Comment

Subscribe to Post Comments [Atom]

<< Home